ವಿಷಯಕ್ಕೆ ಹೋಗಿ

ಶ್ರೀ ದತ್ತಾತ್ರೇಯ ಭಜನೆ

ಶ್ರೀ ದತ್ತಾತ್ರೇಯ ಭಜನೆ  ಗುರು ಹರಿ ಗುರು ಹರ ಗುರುಬ್ರಹ್ಮಾ| ಗುರುವೇ ಸಾಕ್ಷಾತ್ ಪರಬ್ರಹ್ಮಾ|| ಮಾನಸ ಭಜರೇ ಗುರುಚಾರಣಂ| ದುಸ್ತರ ಭಾವ ಸಾಗರ ತರಣಂ|| ಶಿವ ಶಿವ ಶಿವ ಶಿವ ಸಾಂಬ ಚಿದಂಬರ| ಹರ ಹರ ಹರ ಹರ ಸಾಂಬ ಚಿದಂಬರ| ಶಂಭೋ ಶಂಕರ ಸಾಂಬ ಚಿದಂಬರ| ಭವಹರ ಭಯಹರ ಸಾಂಬ ಚಿದಂಬರ|| ಜೈ ಗುರು ದೇವಾ ಚಿದಂಬರಾ| ಸದ್ಗುರು ದೇವಾ ಚಿದಂಬರಾ| ಚಿದಂಬರಾ ಶಿವ ಚಿದಂಬರಾ| ಚಿದಂಬರಾ ಗುರು ಚಿದಂಬರಾ|| ಸಚ್ಚಿದಾನಂದ ಗುರು ಸಚ್ಚಿದಾನಂದ| ಸಚ್ಚಿದಾನಂದ ಗುರು ಸಚ್ಚಿದಾನಂದ|| ಓಂ ನಮೋ ಭಗವತೇ ನಾರಾಯಣಾಯ| ಓಂ ನಮೋ ಭಗವತೇ ವಾಸುದೇವಾಯ| ಓಂ ನಮೋ ಭಗವತೇ ಶ್ರೀನಿವಾಸಾಯ| ಓಂ ನಮೋ ಭಗವತೇ ವೆಂಕಟೇಶಾಯ| ಓಂ ನಮೋ ಭಗವತೇ ರಾಮಚಂದ್ರಾಯ| ಓಂ ನಮೋ ಭಗವತೇ ದತ್ತನಾಥಾಯ| ಓಂ ನಮೋ ಭಗವತೇ ಚಿದಂಬರಾಯ| ಓಂ ನಮೋ ಭಗವತೇ ರಾಘವೇಂದ್ರಾಯ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ತಸ್ಮೈ ಶ್ರೀ ಗುರುವೇ ನಮಃ| ಧ್ಯಾನ ಮೂಲಂ ಗುರೋಮೂರ್ತಿ| ತಸ್ಮೈ ಶ್ರೀ ಗುರುವೇ ನಮಃ| ಪೂಜಾ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಮಂತ್ರ ಮೂಲಂ ಗುರೋ ವಾಕ್ಯo| ತಸ್ಮೈ ಶ್ರೀ ಗುರುವೇ ನಮಃ| ಮೋಕ್ಷ ಮೂಲಂ ಗುರೋ ಕೃಪಾ| ತಸ್ಮೈ ಶ್ರೀ ಗುರುವೇ ನಮಃ|| ಬ್ರಹ್ಮಾನಂದಂ ಕೇವಲಂ| ಜ್ಞಾನಮೂರ್ತಿo  ದ್ವಂದ್ವಾತೀತಂ| ಗಗನ ಸದೃಶಂ| ಆದಿಲಕ್ಷ್ಯಮ್| ತತ್ವಮಸ್ಯಾದಿ ಲಕ್ಷ್ಯಮ್| ಏಕಂ ಏವಂ ವಿಮಲಂ ಅಚಲಂ| ಸರ್ವಧೀ ಸಾಕ್ಷಿ ಭೂತಂ| ಸದ್ಗುರಂ ತ್ವo ನಮಾಮ...

ಯಂತ್ರೋದ್ಧಾರಕ ಪ್ರಾಣದೇವರ ಸ್ತೋತ್ರ (Yantrodharaka hanuman Stotra)

ಶ್ರೀ ಮದ್ವ್ಯಾಸರಾಜರ ವಿರಚಿತ  ಯಂತ್ರೋದ್ಧಾರಕ ಪ್ರಾಣದೇವರ ಸ್ತೋತ್ರ


ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್| ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II
-ಶ್ರೀ ರಾಮನ ದೂತರಾದ ಸುಖದಾಯಕರಾದ ಕಲ್ಪವೃಕ್ಷದಂತೆ ಬೇಡಿದ ಫಲಗಳನ್ನು ಕೊಡುವ, ಪುಷ್ಪ ಹಾಗೂ ವೃತ್ತಾಕಾರವಾದ ಮಹಾಭುಜಗಳುಳ್ಳ ಹಾಗೂ ಎಲ್ಲ ಶತ್ರುಗಳನ್ನು ದೂರಮಾಡುವ ಶ್ರೀ ಹನುಮಂತ ದೇವರಿಗೆ ನಮಸ್ಕರಿಸುತ್ತೇನೆ.

ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಮ್|ಸರ್ವದಾಭೀಷ್ಠದಾತಾರಂ ಸತಾಂವೈ ಧೃಢಮಾಹ್ವಾಯೇ II೨II
-ಅನೇಕ ತರಹದ ರತ್ನಗಳಿಂದ ಅಲಂಕೃತವಾದ ಕುಂಡಲ ಕರ್ಣಾಭರಣಗಳೇ ಮೊದಲಾದ ಆಭರಣ ಗಳಿಂದ ಅಲಂಕೃತರಾದ ಯಾವಾಗಲೂ ಸಜ್ಜನರ ಎಲ್ಲಾ ಇಚ್ಛೆಗಳನ್ನು ಪೂರೈಸುವ ಶ್ರೀ ಯಂತ್ರೋದ್ಧಾರ ಹನುಮಂತ ದೇವರನ್ನು ದೃಢವಾಗಿ ನಂಬಿ ಹೃದಯ ಮಂದಿರದಲ್ಲಿ ಕರೆತಂದು ಕೂಡ್ರಿಸುವೆನು.

ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥಗಿರೌಸದಾ|ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II
-ಸಮುದ್ರದ ಎತ್ತರವಾದ ತೆರೆಗಳಂತೆ ಎತ್ತರವಾದ ಪ್ರವಾಹವುಳ್ಳ, ತಂಪಾದ ಗಾಳಿಯಿಂದ ಹಿತವಾದ  ಚಕ್ರತೀರ್ಥದ ದಕ್ಷಿಣದಲ್ಲಿರುವ ಪರ್ವತದಲ್ಲಿ ವಿರಾಜಮಾನರಾದ  ಯಂತ್ರೋದ್ಧಾರಕ ಪ್ರಾಣದೇವರ ಪಾದ ಕಮಲಗಳಲ್ಲಿ ಶರಣಾಗತನಾಗಿ ಅವುಗಳನ್ನುಆಶ್ರಯಿಸುವನು.

ನಾನಾದೇಶಾಗತೈಃ ಸದ್ಧಿ: ಸೇವಮಾನಂ ನೃಪೋತ್ತಮೈಃ|ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚ ಶಕ್ತಿತಃ II೪II
-ಸಜ್ಜನರಾದ ಶ್ರೇಷ್ಠರಾಜರು ವಿಭಿನ್ನ ದೇಶಗಳಿಂದ ಇಲ್ಲಿಗೆ ಬಂದು, ತಮ್ಮ ಶಕ್ತ್ಯಾನು ಸಾರವಾಗಿ ಧೂಪ, ದೀಪ, ಪಂಚ-ಪಕ್ವಾನ್ನ ಗಳ ನೈವೇದ್ಯ ಮೊದಲಾದವುಗಳಿoದ  ಸೇವೆ ಮಾಡಿದಾಗ ಅವರನ್ನು  ಅನುಗ್ರಹಿಸಿದ ಶ್ರೀ ಯಂತ್ರೋದ್ಧಾರಕ ಪ್ರಾಣ ದೇವರ ಪಾದ ಕಮಲಗಳನ್ನು ನಾನು ಆಶ್ರಯಿಸುತ್ತೇನೆ.

ವ್ರಜಾಮಿ ಹನುಮತ್ಪಾದಂ ಹೇಮಕಾಂತಿ ಸಮಪ್ರಭಮ್|ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ II೫II
-ಬಂಗಾರದ ಕಾಂತಿಯಂತಹ ವಿಶಿಷ್ಟ ಪ್ರತಿಭೆಯಿಂದ ಕೂಡಿದ ಯತೀoದ್ರನಾದ ವ್ಯಾಸತೀರ್ಥ ನೆಂಬ ಹೆಸರುಳ್ಳ ನನ್ನಿ oದ ಅತ್ಯಂತ ಭಕ್ತಿ ಪುರಸ್ಸರವಾಗಿ ಏಕಾಗ್ರತೆಯಿಂದ ಪೂಜಿತನಾದ ಯಂತ್ರೋದ್ಧಾರಕ ಹನುಮಂತ ದೇವರ ಪಾದಕಮಲಗಳನ್ನುಆಶ್ರಯಿಸುವೆನು.

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ|ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು II೬II
-ಆಭರಣ ಶೀಲನಾದ ತ್ರೈವರ್ಣಿಕೋತಮನು ದಿನಾಲು ಮೂರು ಸಲ ಅತ್ಯಂತ ಭಕ್ತಿಯಿಂದ ಈ ಸ್ತೋತ್ರವನ್ನು ಪಠಿಸಿದರೆ ಆರು ತಿಂಗಳೊಳಗಾಗಿ ತಾನು ಬಯಸಿದ ಎಲ್ಲಾ ಸವಲತೆಗಳನ್ನು ಪಡೆಯುತ್ತಾನೆ. ಇದು ನಿಶ್ಚಿತ.

ಪುತ್ರಾರ್ಥಿ ಲಭತೇ ಪುತ್ರಂ ಯಶೋರ್ಥಿ ಲಭತೇ ಯಶಃ|ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಧನಮಾಪ್ನುಯಾತ್ II೭II
-ಈ ಸ್ತೋತ್ರವನ್ನು ಪಠಿಸಿದರೆ ಭಕ್ತರಿಗೆ ಮಕ್ಕಳು ಬೇಕಾಗಿದ್ದರೆ ಮಕ್ಕಳಾಗುವುವು. ಕೀರ್ತಿ ಬೇಕಾಗಿದ್ದರೆ ಕೀರ್ತಿ ಸಿಗುವುದು.  ವಿದ್ಯೆಯು ಬೇಕಾಗಿದ್ದರೆ ವಿದ್ಯೆಯು ಲಭಿಸುವುದು. ಹಣವು ಬೇಕಾಗಿದ್ದರೆ ಹಣವು ಸಿಗುವುದು.

ಸರ್ವತಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ|ಯಃ ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧೃವಮ್II೮II
-ಈ ಸ್ತೋತ್ರವನ್ನು  ಭಜಿಸಿದರೆ ಹೇಳಿದ ಫಲಗಳು ಸಿಗುವವೋ ಇಲ್ಲವೋ ಎಂಬ ಸಂಶಯಬೇಡ. ಏಕೆಂದರೆ ಈ ಫಲಗಳು ನಿಶ್ಚಿತವಾಗಿಯೂ ಸಿಗುವುವು ಎಂಬ ವಿಷಯದಲ್ಲಿ ಸ್ವ ತಃ ಶ್ರೀ ಹರಿಯೇ ಸಾಕ್ಷಿಯಾಗಿದ್ದಾನೆ. ಫಲಗಳು ಸಿಗುವವೋ ಅಥವಾ ಇಲ್ಲವೋ ಎಂದು ಯಾರಾದರೂ ಸಂಶಯ ಪಟ್ಟರೆ ಅವರು ನಿಶ್ಚಿತವಾಗಿಯೂ ನರಕವನ್ನು ಹೊಂದುವರು.

||ಶ್ರೀಕೃಷ್ಣಾರ್ಪಣಮಸ್ತು II 

For More Recent Updates Join Whats-app or Telegram Channel

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿವ ಪಂಚಾಕ್ಷರ ಸ್ತೋತ್ರ

  ಶಿವ ಪಂಚಾಕ್ಷರ ಸ್ತೋತ್ರ ನಾಗೇಂದ್ರಹಾರಾಯ ತ್ರಿಲೋಚನಾಯ  ಭಸ್ಮಾಂಗರಾಗಾಯ ಮಹೇಶ್ವರಾಯ। ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ 'ನ' ಕಾರಾಯ ನಮಃ ಶಿವಾಯ॥ ಮಂದಾಕಿನೀ ಸಲಿಲ ಚಂದನ ಚರ್ಚಿತಾಯ ನಂದೀಶ್ವರ ಪ್ರಮಥನಾಥ ಮಹೇಶ್ವರಾಯ। ಮಂದಾರ ಪುಷ್ಪ ಬಹುಪುಷ್ಪ ಸುಪೂಜಿತಾಯ| ತಸ್ಮೈ 'ಮ' ಕಾರಾಯ ನಮಃ ಶಿವಾಯ॥ ಶಿವಾಯ ಗೌರೀವದನಾಬ್ಜವೃಂದ ಸೂರ್ಯಾಯ ದಕ್ಷಾಧ್ವರನಾಶಕಾಯ। ಶ್ರೀ ನೀಲಕಂಠಾಯ ವೃಷಧ್ವಜಾಯ | ತಸ್ಮೈ 'ಶಿ' ಕಾರಾಯ ನಮಃ ಶಿವಾಯ॥ ವಸಿಷ್ಠ ಕುಂಭೋದ್ಭವ ಗೌತಮಾರ್ಯ ಮುನೀoದ್ರ ದೇವಾರ್ಚಿತಶೇಖರಾಯ। ಚಂದ್ರಾರ್ಕವೈಶ್ವಾನರಲೋಚನಾಯ| ತಸ್ಮೈ 'ವ' ಕಾರಾಯ ನಮಃ ಶಿವಾಯ॥ ಯಕ್ಷಸ್ವರೂಪಾಯ ಜಟಾಧರಾಯ  ಪಿನಾಕಹಸ್ತಾಯ ಸನಾತನಾಯ। ದಿವ್ಯಾಯ ದೇವಾಯ ದಿಗಂಬರಾಯ| ತಸ್ಮೈ  'ಯ' ಕಾರಾಯ ನಮಃ ಶಿವಾಯ॥ x-x-x-x-x- For More Recent Updates Join Whats-app or Telegram Channel -x-x-x-x-x-

ಕಾಲಭೈರವಾಷ್ಟಕಂ

ಕಾಲಭೈರವಾಷ್ಟಕಂ ದೇವರಾಜಸೇವ್ಯಮಾನಪಾವನಾಂಘ್ರಿಪಂಕಜಂ ವ್ಯಾಲಯಜ್ಞಸೂತ್ರಮಿಂದುಶೇಖರಂ ಕೃಪಾಕರಂ | ನಾರದಾದಿಯೋಗಿವೃಂದವಂದಿತಂ ದಿಗಂಬರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೧|| ಭಾನುಕೋಟಿಭಾಸ್ವರಂ ಭವಾಬ್ಧಿತಾರಕಂ ಪರಂ ನೀಲಕಂಠಮೀಪ್ಸಿತಾರ್ಥದಾಯಕಂ ತ್ರಿಲೋಚನಂ | ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೨|| ಶೂಲಟಂಕಪಾಶದಂಡಪಾಣಿಮಾದಿಕಾರಣಂ ಶ್ಯಾಮಕಾಯಮಾದಿದೇವಮಕ್ಷರಂ ನಿರಾಮಯಂ | ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೩|| ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ ಭಕ್ತವತ್ಸಲಂ ಸ್ಥಿರಂ ಸಮಸ್ತಲೋಕವಿಗ್ರಹಂ | ವಿಕ್ವಣನ್ಮನೋಜ್ಞಹೇಮಕಿಂಕಿಣೀಲಸತ್ಕಟಿಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೪|| ಧರ್ಮಸೇತುಪಾಲಕಂ ತ್ವಧರ್ಮಮಾರ್ಗನಾಶಕಂ ಕರ್ಮಪಾಶಮೋಚಕಂ ಸುಶರ್ಮದಾಯಕಂ ವಿಭುಂ | ಸ್ವರ್ಣವರ್ಣಕೇಶಪಾಶಶೋಭಿತಾಂಗಮಂಡಲಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೫|| ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ| ಮೃತ್ಯುದರ್ಪನಾಶನಂ ಕರಾಲದಂಷ್ಟ್ರಭೂಷಣಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೬|| ಅಟ್ಟಹಾಸಭಿನ್ನಪದ್ಮಜಾಂಡಕೋಶಸಂತತಿಂ ದೃಷ್ಟಿಪಾತನಷ್ಟಪಾಪಜಾಲಮುಗ್ರಶಾಸನಂ | ಅಷ್ಟಸಿದ್ಧಿದಾಯಕಂ ಕಪಾಲಮಾಲಿಕಾಧರಂ ಕಾಶಿಕಾಪುರಾಧಿನಾಥಕಾಲಭೈರವಂ ಭಜೆ ||೭|| ಭೂತಸಂಘನಾಯಕಂ ವಿಶಾಲಕೀರ್ತಿದಾಯಕಂ ಕಾಶಿವಾಸಿಲೋಕಪುಣ್ಯಪಾಪಶೋಧಕಂ ವಿಭುಂ | ನೀತಿಮಾರ್ಗ...

ದತ್ತಾತ್ರೇಯ ಭಜನೆಗಳು (Dattatreya Bhajan's)

ದತ್ತಾತ್ರೇಯ  ಭಜನೆಗಳು  ಗುರುಬ್ರಹ್ಮಾ ಗುರುವಿಷ್ಣು  ಗುರುದೇವೋ ಮಹೇಶ್ವರಃ | ಗುರು ಸಾಕ್ಷಾತ್ ಪರಬ್ರಹ್ಮ  ತಸ್ಮೈ  ಶ್ರೀ ಗುರುವೇ ನಮಃ| ಅಚಿಂತ್ಯಾ ವ್ಯಸ್ತರೂಪಾಯ ನಿರ್ಗುಣಾಯ ಗುಣಾತ್ಮನೇ| ಸಮಸ್ತ ಜಗದೋದ್ಧಾರ ಮೂರ್ತಯೇ ಬ್ರಹ್ಮಣೆ ನಮಃ| ಬ್ರಹ್ಮಾನಂದo ಪರಮ ಸುಖದಂ ಕೇವಲಂ ಜ್ಞಾನ ಮೂರ್ತಿo| ದ್ವಂದ್ವಾತೀತಂ ಗಗನ ಸದೃಶಂ ತತ್ವ ಮಸ್ಯಾದಿ ಲಕ್ಷ್ಯo| ಏಕಂ ನಿತ್ಯಂ ವಿಮಲಂ ಅಚಲಂ ಸರ್ವದೇ ಸಾಕ್ಷಿಭೂತಂ| ಭಾವಾತೀತಂ ತ್ರಿಗುಣರಹಿತಂ ಸದ್ಗುರಂ ತ್ವo ನಮಾಮಿ| ಕಾಷಾಯ ವಸ್ತ್ರಂ ಕರದಂಡ ಧಾರಿಣo ಕಮಂಡಲಂ ಪದ್ಮ ಕರೇಣ  ಶಂಖಂ ಚಕ್ರಂ ಗದಾಭೂಷಿತ ಭೂಷಣಾಡ್ಯo ಶ್ರೀಪಾದ ರಾಜಂ ಶರಣಂ ಪ್ರಪದ್ಯೇ ದಿಗಂಬರಂ ಭಸ್ಮ ಸುಗಂಧ ಲೇಪಿನಂ ಚಕ್ರಂ ತ್ರಿಶೊಲಂ ಡಮರುಂ ಗಧಾಂಚ ಪದ್ಮಾ ಸನಸ್ತಾo ರವಿ ಸೋಮ ನೇತ್ರಮ್ ದತ್ತಾತ್ರೇಯ ಧ್ಯಾನಮಭೀಷ್ಟ ಸಿದ್ಧಿತಂ|| ದತ್ತಾತ್ರೇಯ ತವಶರಣಂ| ದತ್ತನ್ನಾಥ ತವಶರಣಂ| ತ್ರಿಗುಣಾತ್ಮಕ ತ್ರಿಗುಣಾತೀತ| ತ್ರಿಭುವನ ಪಾಲಯ ತವಶರಣಂ|| ಶಾಶ್ವತ  ಮೂರ್ತೆ ತವಶರಣಂ| ಶ್ಯಾಮ ಸುಂದರ ತವಶರಣಂ| ಶೇಷಾಭರಣ ಶೇಷಶಾಯಿ ಶೇಷಭೂಷಣ ತವಶರಣಂ|| ಷಡ್ಭುಜ ಮೂರ್ತೆ ತವಶರಣಂ| ಷಡ್ಭುಜ ಯತಿವರ ತವ ಶರಣಂ| ದಂಡ, ಕಮಂಡಲ, ಗಧಾ ಪದ್ಮ , ಶಂಖ, ಚಕ್ರಧರ ತವಶರಣಂ|| ಕರುಣಾ ನಿಧೇ ತವಶರಣಂ| ಕರುಣಾ ಸಾಗರ ತವಶರಣಂ| ಕೃಷ್ಣಾ ಸಂಗಮ ತರುವರವಾಸ ಭಕ್ತವತ್ಸಲ ತವಶರಣಂ| | ಶ್ರೀ ಗುರುನಾಥ ತವಶರಣಂ| ಸದ್ಗುರು ನಾಥ ತವಶರಣಂ| ಶ್ರೀಪಾದ ...